ಸಭೆಯನ್ನುದ್ದೇಶಿಸಿ ಮಾತನಾಡಿದ ಖಾನ್ ನವದೆಹಲಿಯಲ್ಲಿ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುವಂತೆ ಆಹ್ವಾನ ನೀಡಿದ್ದಾರೆ. ದೆಹಲಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರಿದ್ದೇವೆ. ನಾವೆಲ್ಲರೂ ಸೇರಿ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಿದರೆ, ನಮ್ಮ ಮಕ್ಕಳನ್ನು ಯಾರೊಬ್ಬರೂ ಮುಟ್ಟುವ ಗೋಜಿಗೆ ಬರುವುದಿಲ್ಲ ಎಂದು ಖಾನ್ ಗುಡುಗಿದ್ದಾರೆ.