ಪಠಾಣ್ ಕೋಟ್ ಉಗ್ರ ದಾಳಿ; ಮಾಜಿ ಐಎಎಫ್ ಅಧಿಕಾರಿಯ ವಿಚಾರಣೆ

ಪಠಾಣ್‌ಕೋಟ್ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಐಎಸ್‌ಐಗೆ ಗೂಢಚರ್ಯೆ ಮಾಡಲು ಸಹಾಯ ಮಾಡಿದ ಆರೋಪದಲ್ಲಿ...
ರಂಜಿತ್ ಕೆಕೆ
ರಂಜಿತ್ ಕೆಕೆ
Updated on
ನವದೆಹಲಿ: ಪಠಾಣ್‌ಕೋಟ್ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಐಎಸ್‌ಐಗೆ ಗೂಢಚರ್ಯೆ ಮಾಡಲು ಸಹಾಯ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಭಾರತೀಯ ವಾಯುಸೇನೆಯ ಮಾಜಿ ಅಧಿಕಾರಿ ರಂಜಿತ್ ಕೆಕೆ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.  
ವಾಯುಸೇನೆಯಿಂದ ವಜಾಗೊಂಡಿರುವ ರಂಜಿತ್‌ಗೆ ಈ ಉಗ್ರ ದಾಳಿಯಲ್ಲಿ ಕೈವಾಡವಿದೆಯೇ ಎಂಬುದರ ಬಗ್ಗೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಠಾಣ್ ಕೋಟ್‌ನಲ್ಲಿ ಶನಿವಾರ ಮುಂಜಾನೆ ವಾಯುನೆಲೆಯ ಮೇಲೆ ಉಗ್ರರು ದಾಳಿ ಮಾಡಿದ್ದರು. ಈ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ . 
ಭಾರತೀಯ ವಾಯುಸೇನೆಯಲ್ಲಿದ್ದ ರಂಜಿತ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಂಧಿತನಾಗಿದ್ದನು. ಐಎಸ್‌ಐ ಜತೆ ರಂಜಿತ್ ಕೆಲವು ಮಾಹಿತಿ ಹಂಚಿಕೊಂಡಿದ್ದು, ವಾಯುಸೇನೆಯಿಂದ ಈತನನ್ನು ವಜಾಗೈಯ್ಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com