ತನಿಖೆಯ ಬಗ್ಗೆ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಎನ್ಐಎ ಮುಖ್ಯಸ್ಥ ಶರದ್ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್ಐಆರ್ ದಾಖಲಾಗಿದ್ದು ಇದರಿಂದ ಈ ಕೃತ್ಯದ ಹಿಂದೆ ಪಾಕ್ ಕೈವಾಡವಿದೆ ಎಂದು ಹೇಳಬಹುದು. ದಾಳಿಗೆ ಮುನ್ನ ಉಗ್ರರು ವಶ ಪಡಿಸಿಕೊಡ ಇನ್ನೋವಾ ಟ್ಯಾಕ್ಸಿಯ ಚಾಲಕನ ಹತ್ಯೆ, ಗುರುದಾಸ್ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ಮತ್ತು ವಾಯುನೆಲೆ ಮೇಲೆ ದಾಳಿ ಈ ಮೂರು ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಈ ಎಫ್ಐಆರ್ಗಳಿಂದ ಈ ದುಷ್ಕೃತ್ಯದ ಹಿಂದೆ ಪಾಕ್ ಉಗ್ರ ಸಂಘಟನೆಗಳ ಕೈವಾಡವಿದೆ. ಆದಾಗ್ಯೂ ತನಿಖೆ ಮುಂದುವರಿದಿದ್ದು, ಇಂಥವರೇ ದಾಳಿ ನಡೆಸಿದ್ದಾರೆ ಎಂದು ಈಗ ಹೇಳಲು ಸಾಧ್ಯವಿಲ್ಲ.