ಪಠಾಣ್ ಕೋಟ್ ದಾಳಿ: ಹನಿ ಟ್ರ್ಯಾಪ್ ಗೊಳಗಾಗಿದ್ದರು ಗುರುದಾಸ್ ಪುರ್ ಎಸ್ ಪಿ?

ಪಠಾಣ್ ಕೋಟ್ ದಾಳಿ ಸಂಬಂಧ ಅಪಹರಣಕ್ಕೊಳಗಾಗಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಸಲ್ವೀಂದರ್ ಸಿಂಗ್ ಪಾಕಿಸ್ತಾನದ ಐಎಸ್ ಐ ನಿಂದ ಹನಿ ಟ್ರ್ಯಾಪ್ ಗೆ ...
ಸಲ್ವೀಂದರ್ ಸಿಂಗ್
ಸಲ್ವೀಂದರ್ ಸಿಂಗ್

ಪಠಾಣ್ ಕೋಟ್: ಪಠಾಣ್ ಕೋಟ್ ದಾಳಿ ಸಂಬಂಧ ಅಪಹರಣಕ್ಕೊಳಗಾಗಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಸಲ್ವೀಂದರ್ ಸಿಂಗ್ ಪಾಕಿಸ್ತಾನದ ಐಎಸ್ ಐ ನಿಂದ ಹನಿ ಟ್ರ್ಯಾಪ್ ಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ಸಲ್ವೀಂದರ್ ಸಿಂಗ್ ಪಾಕಿಸ್ತಾನದ ಐಎಸ್ ಐ ಹಾಗೂ ಜೈಶ್-ಇ ಮೊಹಮದ್  ಉಗ್ರ ಸಂಘಟನೆ ಜೊತೆ ನಂಟು ಹೊಂದಿರಬಹುದೆಂದು ಶಂಕಿಸಲಾಗಿದೆ.

ಎಸ್ ಪಿ ಸಲ್ವೀಂದರ್ ಸಿಂಗ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ರಾಷ್ಟ್ರೀಯ ತನಿಖಾ ತಂಡ, ಸಿಂಗ್ ಜೊತೆ ಅಪಹರಣಕ್ಕೊಳಗಾಗಿದ್ದ ಸಿಂಗ್ ಮನೆಯ ಅಡುಗೆ ಕೆಲಸದಾತ ಮದನ್ ಗೋಪಾಲ್ ಹಾಗೂ ಸ್ನೇಹಿತ ರಾಜೇಶ್ ವರ್ಮಾ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಪಠಾಣ್ ಕೋಟ್ ನಿಂದ 25 ಕಿ.ಮೀ ದೂರದಲ್ಲಿರುವ ಕೊಲಿಯಾ ಎಂಬ ಹಳ್ಳಿಯ ಬಳಿ ಬರುತ್ತಿದ್ದಾಗ ಶಸ್ತ್ರ ಸಜ್ಜಿತ ಉಗ್ರರು ತಮ್ಮನ್ನು ತಡೆದು , ತಮ್ಮ ಸ್ನೇಹಿತ ಹಾಗೂ ಅಡುಗೆ ಕೆಲಸದಾತನನ್ನು ಸೇರಿಸಿ ಕಿಡ್ನಾಪ್ ಮಾಡಿದ್ದರು ಎಂದು ಹೇಳಿಕೆ ನೀಡಿದ್ದರು.

ಸಲ್ವೀಂದರ್ ಸಿಂಗ್ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದು, ಪಠಾಣ್ ಕೋಟ್ ದಾಳಿಯಲ್ಲಿ ಅವರದ್ದು ನಿರ್ಣಾಯಕ ಪಾತ್ರವಿದ್ದು, ಭಯೋತ್ಪಾದಕರಿಗೆ ಬೆಂಬಲ ನೀಡಿದ್ದಾರೆ ಎಂದು ಖಾಸಗಿ ಚಾನೆಲ್ ವೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com