ಕಳೆದ ವಾರ ಪಠಾಣ್ ಕೋಟ್ ದಾಳಿಗೆ ಮುನ್ನ ಪಾಕ್ಉಗ್ರರು ತನ್ನನ್ನು ಅಪಹರಣ ಮಾಡಲು ಯತ್ನಿಸಿದ್ದರು ಎಂದು ಸಲ್ವಿಂದರ್ ಹೇಳಿದ್ದರು. ತಾನು ಪಠಾಣ್ಕೋಟ್ನಲ್ಲಿರುವ ದೇವಾಲಯವೊಂದರ ನಿತ್ಯ ಸಂದರ್ಶಕನಾಗಿದ್ದು, ಅಲ್ಲಿಗೆ ಹೋಗಿ ಬರುವ ವೇಳೆ ಅಪಹರಣ ಯತ್ನ ನಡೆದಿತ್ತು ಎಂದು ಸಿಂಗ್ ಹೇಳಿದ್ದರು. ಆದರೆ ತಾವು ಸಲ್ವಿಂದರ್ ಅವರನ್ನು ಡಿಸೆಂಬರ್ 31ಕ್ಕೆ ಮೊದಲ ಬಾರಿ ನೋಡಿದ್ದು ಎಂದು ಆ ದೇಗುಲದ ಉಸ್ತುವಾರಿ ವಹಿಸಿದ್ದ ಸೋಮರಾಜ್ ಎಂಬವರು ಹೇಳಿದ್ದಾರೆ.