ನಾರದನಂತೆ ವರ್ತಿಸುವುದನ್ನು ಬಿಟ್ಟು ವಿತ್ತ ಸಚಿವರ ರೀತಿ ವರ್ತಿಸಿ: ಜೇಟ್ಲಿಗೆ ಕಾಂಗ್ರೆಸ್ ಸಲಹೆ

ಸಂಸತ್ ಅಧಿವೇಶನಗಳು ವ್ಯರ್ಥವಾಗಲು ಕಾಂಗ್ರೆಸ್ ಪಕ್ಷನ್ನು ಹೊಣೆ ಮಾಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಸಂಸತ್ ಅಧಿವೇಶನಗಳು ವ್ಯರ್ಥವಾಗಲು ಕಾಂಗ್ರೆಸ್ ಪಕ್ಷನ್ನು ಹೊಣೆ ಮಾಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.  

ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕತ್ವದ ನಡುವೆ ಬಿರುಕು ಮೂಡಿಸಲು ಅರುಣ್ ಜೇಟ್ಲಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅರುಣ್ ಜೇಟ್ಲಿ ನಾರದ ಮುನಿಯಂತೆ ವರ್ತಿಸುವುದನ್ನು ಬಿಟ್ಟು ಹಣಕಾಸು ಸಚಿವರ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದು ಸಲಹೆ ನೀಡಿದ್ದಾರೆ.

ಅರುಣ್ ಜೇಟ್ಲಿ ಅವರು ದೇಶದ ಆರ್ಥಿಕ ಪರಿಸ್ಥಿಯ ಮೇಲಿನ ಹತೋಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ವಿತ್ತ ಸಚಿವರಾಗುವ ಬದಲು ಅರುಣ್ ಜೇಟ್ಲಿ, ನಾರದ ಮುನಿಯಂತಾಗಿದ್ದಾರೆ ಎಂದಿರುವ ಜೈರಾಮ್ ರಮೇಶ್, ಕಾಂಗ್ರೆಸ್ ನಾಯಕತ್ವದಲ್ಲಿ ಗೊಂದಲಗಳಿಲ್ಲ, ಕಾಂಗ್ರೆಸ್ ನಾಯಕರಲ್ಲಿ ಬಿರುಕುಂಟಾಗಿದೆ ಎಂದುಕೊಂಡಿದ್ದರೆ ಅದು ಭ್ರಮೆಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com