ಇಲಾಖೆಯ ಈ ಕ್ರಮದಿಂದಾಗಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲದೆ ರೋಗಿಗಳು, ಕ್ರೀಡಾಳುಗಳು ಹಾಗೂ ಚಕ್ರ ಪ್ರಶಸ್ತಿ ಪುರಸ್ಕೃತರು, ಮಾಜಿ ಶಾಸಕರು ಹಾಗೂ ಸಂಸದರು ನಷ್ಟ ಅನುಭವಿಸಲಿದ್ದಾರೆ. ಹಿರಿಯ ನಾಗರಿಕ ವಿಭಾಗದಲ್ಲಿ ದುರ್ಬಳಕೆ ಅತಿಯಾಗಿರುವುದೂ ಸಬ್ಸಿಡಿ ಕಡಿತ ನಿರ್ಧಾರಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಸಾಮಾಜಿಕ ಹೊಣೆಗಾರಿಕೆಗಾಗಿ ರು.1,400 ಕೋಟಿ ವೆಚ್ಚ ಮಾಡಲಾಗಿದ್ದು, ಈ ಪೈಕಿ ರು.1,150 ಕೋಟಿ ಹಿರಿಯ ನಾಗರಿಕರ ಸಬ್ಸಿಡಿಗಾಗಿಯೀ ವೆಚ್ಚವಾಗಿದೆ.