56 ಇಂಚಿನ ಎದೆಯ ಮೋದಿ, ಗಡಿ ದಾಟಿ ದೇಶದ ತಂಟೆಗೆ ಬಂದರೆ ಕಣ್ಣಿಗೆ ಕಣ್ಣು ಕೀಳುತ್ತೇವೆ ಎಂದು ಅಬ್ಬರಿಸಿದ್ದರು. ಆದರೆ ಈಗ ಪಾಕಿಸ್ತಾನದ ಉಗ್ರರು ಪಠಾಣ್ ಕೋಟ್ ಮೇಲೆ ದಾಳಿ ನಡೆಸಿ ನಮ್ಮ ಸೈನಿಕರನ್ನು ಹತ್ಯೆಗೈದಾಗ ಸುಮ್ಮನಿರುವುದು ಯಾಕೆ?. ಬಿಜೆಪಿಯ ಕೈಯಲ್ಲಿರುವ ನಮ್ಮ ದೇಶ ಸುರಕ್ಷಿತವಾಗಿಲ್ಲ. ಆದ್ದರಿಂದ ಜಾತ್ಯಾತೀತ ಪಕ್ಷಗಳೆಲ್ಲಾ ಮತ್ತೆ ಒಂದಾಗಬೇಕೆಂದು ಲಾಲೂ ಹೇಳಿದ್ದಾರೆ.