ಕೋಲ್ಕತಾ: ನೇತಾಜಿ ಸುಭಾಷ್ ಚಂದ್ರ ಬೋಸರಿಗೆ ದೇಶದ ನಾಯಕನೆಂಬ ಗೌರವ(ಬಿರುದು) ನೀಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸುಭಾಷ್ ಚಂದ್ರ ಬೋಸರ ನಿಗೂಢ ಸಾವಿಗೆ ಸಂಬಂಧಿಸಿದ ಕಡತಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ ಸುಭಾಷ್ ಚಂದ್ರ ಬೋಸರು ದೇಶದ ನಾಯಕನೆಂಬ ಗೌರವ ಪಡೆಯಲು ಅರ್ಹರಾಗಿದ್ದು ಅವರಿಗೆ ಆ ಬಿರುದನ್ನು ನೀಡಬೇಕೆಂದು ಎಂದು ಹೇಳಿದ್ದಾರೆ. ನೇತಾಜಿ ಅವರ ಬಗೆಗಿನ ಸತ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಟ್ವೀಟ್ ನಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Advertisement