ಅಸಹಿಷ್ಣುತೆ ಅಲ್ಲ, ಅತಿ ಸೂಕ್ಷ್ಮತೆ ಇದೆ: ನಟಿ ಕಾಜೋಲ್

ಬಾಲಿವುಡ್ ನಟಿ ಕಾಜೋಲ್ ಅತಿ ಸೂಕ್ಷ್ಮತೆ ಬಗ್ಗೆ ಮಾತನಾಡಿದ್ದು, ಭಾರತದಲ್ಲಿ ಅತಿ ಸೂಕ್ಷ್ಮತೆ ಇದ್ದು, ಜನರು ಕೆಲವು ವಿಷಯಗಳ ಬಗ್ಗೆ ಅತಿ ಸೂಕ್ಷ್ಮತೆಯಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಟಿ  ಕಾಜೋಲ್
ನಟಿ ಕಾಜೋಲ್
Updated on

ಜೈಪುರ: ಅಮೀರ್ ಖಾನ್, ಶಾರೂಖ್ ಖಾನ್, ಕರಣ್ ಜೋಹರ್ ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದರೆ, ಬಾಲಿವುಡ್ ನಟಿ ಕಾಜೋಲ್ ಅತಿಸೂಕ್ಷ್ಮತೆ ಬಗ್ಗೆ ಮಾತನಾಡಿದ್ದು, ಭಾರತದಲ್ಲಿ ಅತಿ ಸೂಕ್ಷ್ಮತೆ ಇದ್ದು, ಜನರು ಕೆಲವು ವಿಷಯಗಳ ಬಗ್ಗೆ ಅತಿ ಸೂಕ್ಷ್ಮತೆಯಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ದಿಲ್ ವಾಲೆ ಸಿನಿಮಾದಲ್ಲಿ ನಟಿಸಿರುವ ಕಾಜೋಲ್, ನಾವು ಯಾವ ಸನ್ನಿವೇಶದಲ್ಲಿ ಏನನ್ನು ಹೇಳುತ್ತೇವೆ ಎಂಬುದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರತಿ ಪದಗಳು ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥಗಳನ್ನು ಧ್ವನಿಸುತ್ತದೆ ಎಂದು ಕಾಜೋಲ್ ಅಭಿಪ್ರಾಯಪಟ್ಟಿದ್ದಾರೆ.
ಬುದ್ಧಿವಂತಿಕೆಯಿಂದ ಮಾತನಾಡುವುದು ಸಾರ್ವಜನಿಕ ಜೀವನದಲ್ಲಿರುವವರ ಕರ್ತವ್ಯವಾಗಿರುತ್ತದೆ ಎಂದು ಕಾಜೋಲ್ ಹೇಳಿದ್ದಾರೆ. ಅಮೀರ್ ಖಾನ್, ಶಾರೂಖ್ ಖಾನ್ ನೇರವಾಗಿ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಕಾಜೋಲ್ ಅವರೇ ಹೇಳಿರುವಂತೆ ಬುದ್ಧಿವಂತಿಕೆಯಿಂದ ಮಾತನಾಡಿದ್ದು ಅತಿಸೂಕ್ಷ್ಮತೆ ಇದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com