ಪ್ರಶಸ್ತಿ ವಾಪಸಾತಿಯೊಂದು ಪಿತೂರಿ, ಕರಣ್ ಜೋಹಾರ್ ಹೇಳಿಕೆಗೆ ಮಹತ್ವವಿಲ್ಲ: ವಿ ಕೆ ಸಿಂಗ್

ಅಸಹಿಷ್ಣುತೆ ಕಾರಣವನ್ನು ಮುಂದಿಟ್ಟುಕೊಂಡು ಅವಾರ್ಡ್ ವಾಪಸಿ ಚಳುವಳಿ ನಡೆಸಿದ್ದನ್ನು ಕೇಂದ್ರ ಸಚಿವ ವಿಕೆ ಸಿಂಗ್ 'ಪಿತೂರಿ' ಎಂದು ಹೇಳಿದ್ದಾರೆ.
ವಿಕೆ ಸಿಂಗ್
ವಿಕೆ ಸಿಂಗ್

ಜೋಧ್ ಪುರ: ಅಸಹಿಷ್ಣುತೆ ಕಾರಣವನ್ನು ಮುಂದಿಟ್ಟುಕೊಂಡು ಅವಾರ್ಡ್ ವಾಪಸಿ ಚಳುವಳಿ ನಡೆಸಿದ್ದನ್ನು ಕೇಂದ್ರ ಸಚಿವ ವಿಕೆ ಸಿಂಗ್ 'ಪಿತೂರಿ' ಎಂದು ಹೇಳಿದ್ದಾರೆ.  
ಅವಾರ್ಡ್ ವಾಪಸಿ ಚಳುವಳಿ ಪೂರ್ವನಿಯೋಜಿತ ಯೋಜನೆಯಾಗಿತ್ತು ಎಂದು ಹೇಳಿರುವ ವಿಕೆ ಸಿಂಗ್, ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದ ಕರಣ್ ಜೋಹಾರ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಚಾರಕ್ಕಾಗಿ ಕರಣ್ ಜೋಹರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅದಕ್ಕೆ ಮಹತ್ವ ನೀಡಬಾರದು ಎಂದು ಹೇಳಿದ್ದಾರೆ.
ಕರಣ್ ಜೋಹಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳಿಗೆ ಜೋಹಾರ್ ಅವರನ್ನೇ ಪ್ರಶ್ನಿಸುವಂತೆ ಹೇಳಿರುವ ವಿಕೆ ಸಿಂಗ್, ಅಸಹಿಷ್ಣುತೆ ಕಾರಣವನ್ನು ಮುಂದಿಟ್ಟುಕೊಂಡು ನಡೆಯುತ್ತಿರುವುದೆಲ್ಲವೂ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com