ಎಸ್ಸಿ ಹಾಗೂ ಎಸ್ಟಿ ಸಮುದಾಯದವರ ವಿರುದ್ಧ ದೌರ್ಜನ್ಯವೆಸಗುವ, ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರದ ಮೂಲಕ ಅವರ ಘನತೆಗೆ ಧಕ್ಕೆ ತರುವಂತಹ ಕೆಲಸಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹೊಸ ತಿದ್ದುಪಡಿ ಕಾಯ್ದೆಯು ಮಂಗಳವಾರದಿಂದ ಜಾರಿಗೆ ಬರಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ, 2015ರ ಪ್ರಕಾರ, ಇನ್ನು ಮುಂದೆ ತಲೆ ಬೋಳಿಸುವಿಕೆ, ನಿರಾವರಿ ಸೌಲಭ್ಯ ಅಥವಾ ಅರಣ್ಯ ಹಕ್ಕುಗಳ ನಿರಾಕರಣೆ, ಚಪ್ಪಲಿ ಹಾರ, ಮನುಷ್ಯ ಅಥವಾ ಅರಣ್ಯ ಹಕ್ಕುಗಳ ನಿರಾಕರಣೆ. ಚಪ್ಪಲಿ ಹಾರ , ಮನುಷ್ಯ ಅಥವಾ ಪ್ರಾಣಿಗಳ ಮಲ ಹೊರುವಿಕೆ, ಎಸ್ಸಿ ಎಸ್ಟಿ ಮಹಿಳೆಯರನ್ನು ದೇವದಾಸಿಯಂತೆ ನಡೆಸಿಕೊಳ್ಳುವುದು, ಜಾತಿ ಹೆಸರಿನಲ್ಲಿ ಅವಹೇಳನದಂತಹ ಕ್ರಮಗಳೂ ದಲಿತ ದೌರ್ಜನ್ಯದಡಿ ಬರುತ್ತದೆ.