ಸುನಂದಾ ಕೊಲೆ ಪ್ರಕರಣ:ತರೂರ್ ಗೆ ಶೀಘ್ರವೇ ಸುಳ್ಳು ಪತ್ತೆ ಪರೀಕ್ಷೆ

ಸುನಂದಾ ಪುಷ್ಕರ್‌ ಕೊಲೆ ಪ್ರಕರಣದ ಸಂಬಂಧ, ಸಂಸದ, ಶಶಿ ತರೂರ್‌ ಅವರನ್ನು ಸದ್ಯದಲ್ಲೇ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗುವುದೆಂದು ಹೇಳಲಾಗಿದೆ....
ಶಶಿ ತರೂರ್
ಶಶಿ ತರೂರ್
Updated on

ನವದೆಹಲಿ: ಸುನಂದಾ ಪುಷ್ಕರ್‌ ಕೊಲೆ ಪ್ರಕರಣದ ಸಂಬಂಧ, ಸಂಸದ, ಶಶಿ ತರೂರ್‌ ಅವರನ್ನು ಸದ್ಯದಲ್ಲೇ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗುವುದೆಂದು ಹೇಳಲಾಗಿದೆ.

ಪ್ರಕರಣದ ಸಂಬಂಧವಾಗಿ ನಡೆಯಲಿರುವ ಹೊಸ ತನಿಖೆಯಲ್ಲಿ ತರೂರ್‌ ಅವರ ಕಾರು ಚಾಲಕ ಮತ್ತು ಮನೆ ಕೆಲಸದವರಾದ ಬಜರಂಗಿ ಮತ್ತು ನಾರಾಯಣ್‌ ಸಿಂಗ್‌ ಅವರನ್ನು ವಿಚಾರಣೆಗೊಳಪಡಿಸಲಾಗುವುದು. ತರೂರ್‌ ಅವರ ಕುಟುಂಬ ಸ್ನೇಹಿತನಾಗಿರುವ ಸಂಜಯ್‌ ದೇವನ್‌ ಮತ್ತು ಸುನಂದಾ ಅವರನ್ನು ಪರೀಕ್ಷಿಸಿದ್ದ ವೈದ್ಯರನ್ನು ಕೂಡ ಈ ಸಂಬಂಧವಾಗಿ ಪ್ರಶ್ನಿಸಲಾಗುವುದು ಎಂದು ಮೂಲಗಳು ಹೇಳಿವೆ.

ಸುನಂದಾ ಪುಷ್ಕರ್‌ ಸತ್ತು ಬಿದ್ದಿದ್ದ ಹೊಟೇಲ್‌ ಕೋಣೆಯಲ್ಲಿ ಅಲ್‌ಪ್ರಾಕ್ಸ್‌ ಮಾತ್ರೆಗಳು ಸಿಕ್ಕಿದ್ದವು. ಈ ಮಾತ್ರೆಗಳ ಬ್ಯಾಚ್‌ ಸಂಖ್ಯೆ ಇತ್ಯಾದಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮಾರಿದವರು ಯಾರೆಂದು ಖಚಿತಪಡಿಸಿಕೊಳ್ಳುವ ಸಲುವಾಗಿ ದಿಲ್ಲಿಯ ಲೋಧಿ ಕಾಲೋನಿ ಪ್ರದೇಶದಲ್ಲಿರುವ ಕೆಲವು ಔಷಧದ ಅಂಗಡಿಗಳನ್ನು ತನಿಖಾಧಿಕಾರಿಗಳು ಸಂಪರ್ಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com