ಈ ಘಟನೆಗಳು ಸ್ವಾತಿಯನ್ನು ಕೊಲ್ಲುವಂತೆ ತನ್ನನ್ನು ಪ್ರೇರೇಪಿಸಿದವು ಎಂದು ರಾಮ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. ಆಕೆಯ ಮೇಲೆ ದಾಳಿ ನಡೆಸಬೇಕೆಂದು ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ರಾಂಕುಮಾರ್ ತಿರುನಲ್ವೇಲಿಯ ತನ್ನ ನೆರೆಯ ತೋಟದಿಂದ ಕತ್ತಿಯನ್ನು ಪಡೆದುಕೊಂಡಿದ್ದನು. ಸ್ವಾತಿ ಎಷ್ಟು ಹೊತ್ತಿಗೆ ಹೋಗುತ್ತಾಳೆ, ಎಲ್ಲಿಗೆ ಹೋಗುತ್ತಾಳೆ, ಎಷ್ಟು ಹೊತ್ತಿಗೆ ಬರುತ್ತಾಳೆ ಎಂಬುದನ್ನೆಲ್ಲ ಚೆನ್ನಾಗಿ ತಿಳಿದುಕೊಂಡಿದ್ ರಾಮ್, ಸಮಯಕ್ಕಾಗಿ ಹೊಂಚುಹಾಕುತ್ತಿದ್ದ.