ಗಲಭೆ ಪೀಡಿತ ಸೂಡಾನ್ ನಿಂದ 156 ಮಂದಿ ಭಾರತೀಯರು ವಾಪಸ್

ಗಲಭೆ ಪೀಡಿತ ಸೂಡಾನ್ ನಲ್ಲಿ ಸಿಲುಕಿದ್ದ 156 ಭಾರತೀಯರನ್ನು ಕೇಂದ್ರ ಸರ್ಕಾರ ಸಂಕಟ್ ಮೋಚನ್ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತಕ್ಕೆ...
ಸೂಡಾನ್ ನಿಂದ ವಾಪಸಾದ ಭಾರತೀಯರು
ಸೂಡಾನ್ ನಿಂದ ವಾಪಸಾದ ಭಾರತೀಯರು

ತಿರುವನಂತಪುರ: ಗಲಭೆ ಪೀಡಿತ ಸೂಡಾನ್ ನಲ್ಲಿ ಸಿಲುಕಿದ್ದ 156 ಭಾರತೀಯರನ್ನು ಕೇಂದ್ರ ಸರ್ಕಾರ ಸಂಕಟ್ ಮೋಚನ್ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ.

ಕೇಂದ್ರ ವಿದೇಶಾಂಗ ರಾಜ್ಯಖಾತೆ ಸಚಿವ ವಿ.ಕೆ ಸಿಂಗ್ ನೇತೃತ್ವದಲ್ಲಿ 2ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ಎರಡು ವಿಮಾನಗಳ ಮೂಲಕ 156 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ.

156 ಭಾರತೀಯರ ಪೈಕಿ 85 ಮಂದಿ ಕೇರಳದ ತಿರುವನಂತಪುರ ಹಾಗೂ 71 ಮಂದಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ.

156 ಭಾರತೀಯರಲ್ಲಿ 46 ಕೇರಳಿಗರು, ನೇಪಾಳದ 2, 7 ಮಹಿಳೆಯರು ಹಾಗೂ 3 ಮಕ್ಕಳು ಸೇರಿದ್ದು, ಇನ್ನುಳಿದಂತೆ ದಕ್ಷಿಣ ಭಾರತದ ಮೂಲದವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com