ಸೌದಿ ಅರೇಬಿಯಾದಿಂದ ಸ್ಕೈಪ್ ಮೂಲಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಜಾಕೀರ್ ನಾಯಕ್, ಬಾಂಗ್ಲಾದೇಶದ ಢಾಕಾ ದಾಳಿಕೋರರು ಸೇರಿದಂತೆ ಯಾವುದೇ ಭಯೋತ್ಪಾ ದಕರಿಗೆ ನಾನು ಪ್ರೇರಣೆ ನೀಡಿಲ್ಲ. ನಾನೊಬ್ಬ ಶಾಂತಿದೂತ. ಅಮಾಯಕ ಜನರನ್ನು ಕೊಲ್ಲುವುದಕ್ಕೆ ಇಸ್ಲಾಂನಲ್ಲಿ ನಿರ್ಬಂಧವಿದೆ. ಎಲ್ಲ ರೀತಿಯ ಭಯೋತ್ಪಾದನೆಯನ್ನೂ ನಾನು ವಿರೋಧಿಸುತ್ತೇನೆ. ನನ್ನ ಹೇಳಿಕೆಗಳನ್ನು ಸಂದಭೋìಚಿತವಲ್ಲದ ರೀತಿಯಲ್ಲಿ ಬಿಂಬಿಸುವ ಮೂಲಕ ಮಾಧ್ಯಮಗಳೇ ವಿಚಾರಣೆ ನಡೆಸುತ್ತಿವೆ' ಎಂದು ಹರಿಹಾಯ್ದಿದ್ದಾನೆ.