ಬಂಡಾಯವೆದ್ದು ಕಾಂಗ್ರೆಸ್ ನಿಂದ ದೂರವಾಗಿ ಹೊಸ ಸರ್ಕಾರ ರಚಿಸಿಕೊಂಡಿದ್ದ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷ ಅರುಣಾಚಲಪ್ರದೇಶದಲ್ಲಿ ಸರ್ಕಾರವನ್ನು ಉಳಿಸಿಕೊಂಡಿದೆ. ಮುಖ್ಯಮಂತ್ರಿ ನಬಮ್ ತುಕಿ ಅವರಿಗೆ ಕೊಕ್ ನೀಡಲಾಗಿದ್ದು, ಪೆಮಾ ಖಂಡು ಅವರನ್ನು ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗಿತ್ತು. ಖಂಡು ಅವರಿಗೆ ಇಬ್ಬರು ಪಕ್ಷೇತರರು ಸೇರಿ 47 ಶಾಸಕರು ಬೆಂಬಲ ಸೂಚಿಸಿದ್ದರು.