ಹ್ಯಾಕರ್ ಆರೋಪದ ಬಗ್ಗೆ ಎಟಿಎಸ್ ಪ್ರಾಥಮಿಕ ತನಿಖೆ ನಡೆಸಿದ್ದು, ತನಿಖೆಯಲ್ಲಿ ಉಗ್ರರ ನಂಟಿನ ಬಗ್ಗೆ ಮತ್ತು ಖಾಡ್ಸೆ ಹಾಗೂ ದಾವೂದ್ ನಡುವೆ ದೂರವಾಣಿ ಕರೆ ವಿನಿಮಯವಾದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ ಎಂದು ಎಟಿಎಸ್ ವಕೀಲ ನಿತೀನ್ ಪ್ರಧಾನ್ ಅವರು ನ್ಯಾಯಮೂರ್ತಿ ಎನ್.ಎಚ್. ಪಾಟೀಲ್ ಮತ್ತು ಪಿ.ಡಿ.ನಾಯಕ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.