ಸಾಮಾನ್ಯವಾಗಿ ಕಲಾಪಗಳಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಗಳ, ಕಿತ್ತಾಟ ನಡೆಯುತ್ತವೆ. ಆಡಳಿತ ಪಕ್ಷವನ್ನು ಹೇಗೆ ಬಗ್ಗುಬಡಿಯಬೇಕೆಂದು ವಿರೋಧ ಪಕ್ಷಗಳು ಹೊಂಚು ಹಾಕುತ್ತಿರುತ್ತವೆ. ಆದರೆ ಇಂದು ಲೋಕಸಭೆಯಲ್ಲಿ ಅಧಿವೇಶ ಆರಂಭವಾಗುವ ಮುನ್ನ ಸ್ನೇಹದ ವಾತಾವರಣ ಕಂಡುಬಂತು. ಸದನದ ಒಳಗೆ ಹೋಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮೀಪ ಹೋಗಿ ಮಾತುಕತೆ ನಡೆಸಿದರು. ಅಲ್ಲದೆ ಇತರ ಪ್ರತಿಪಕ್ಷಗಳ ಮುಖಂಡರಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮೊದಲಾದವರನ್ನು ಭೇಟಿ ಮಾಡಿದರು.ಪ್ರಧಾನಿಯವರಿಗೆ ಹಿರಿಯ ಸಚಿವೆ ಸುಷ್ಮಾ ಸ್ವರಾಜ್ ಸಾಥ್ ನೀಡಿದರು.