ಪೀಪಲ್ಸ್ ಫಾರ್ ಎನಿಮಲ್ಸ್(ಪಿಎಫ್ಎ) ಎಂಬ ಪ್ರಾಣಿದಯಾ ಸಂಘಟನೆಯ ಅಧಿಕಾರಿ ಶರತ್ ಲಾಲ್ ಅವರಿಗೆ ಮೊನ್ನೆ ಗುರುವಾರ ಒಂದು ದೂರವಾಣಿ ಕರೆ ಬಂತು. ಆಗ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಆಗ ಗುಂಡಿಯಲ್ಲಿ ಸುಮಾರು 30 ನಾಯಿಗಳನ್ನು ಹೂತಿರುವುದು ಪತ್ತೆಯಾಯಿತು. ಕೂಡಲೇ ಅವುಗಳನ್ನು ಹೊರತೆಗೆದು ಕೋರಮಂಗಲದಲ್ಲಿರುವ ಕಾರ್ಟ್ ಮನ್ ಪಶು ಚಿಕಿತ್ಸಾಲಯಕ್ಕೆ ದಾಖಲಿಸಿದರು. ಉಳಿದ ನಾಯಿಗಳು ಸತ್ತು ಹೋಗಿದ್ದವು ಎನ್ನುತ್ತಾರೆ ಶರತ್ ಲಾಲ್.