ನವದೆಹಲಿ: ಲೋಕಸಭೆಯಲ್ಲಿ ಮುಂಗಾರು ಅಧಿವೇಶನದ ಕಲಾಪದಲ್ಲಿ ಸಚಿವ ಬಂಡಾರು ದತ್ತಾತ್ರೇಯ ಬಾಲಕಾರ್ಮಿಕ ಮಸೂದೆ ಬಗ್ಗೆ ವಿವರಣೆ ನೀಡಿದ ನಂತರ ಬಾಲಕಾರ್ಮಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ.
ಬಾಲಕ ಕಾರ್ಮಿಕ ಮಸೂದೆ ತಿದ್ದುಪಡಿಯಂತೆ ಬಾಲಕಾರ್ಮಿಕರ ವಯೋಮಾನವನ್ನು 14 ರಿಂದ 18 ವರ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ದತ್ತಾತ್ರೇಯ ತಿಳಿಸಿದ್ದಾರೆ. 14 ವರ್ಷದ ಮಕ್ಕಳಿಗೆ ಆರ್ ಟಿ ಇ ಆಡಿ ಕಡ್ಡಾಯ ಶಿಕ್ಷಣ ಜಾರಿಗೆ ತರಲಾಗುವುದು. ಕಳೆದ ವರ್ಷ ಸುಮಾರು 10 ಲಕ್ಷ ದಾಳಿಗಳು ನಡೆದಿದ್ದು ಅದರಲ್ಲಿ 26 ಸಾವಿರ ಬಾಲಕಾರ್ಮಿಕ ಮಸೂದೆ ಉಲ್ಲಂಘನೆ ಮಾಡಿರುವ ಪ್ರಕರಣ ದಾಖಲಾಗಿವೆ ಎಂದು ಹೇಳಿದ್ದಾರೆ.
ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದರೆ, ಅಂದರೆ ಮೊದಲ ಬಾರಿಗೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 10 ಸಾವಿರ ರೂ ದಂಡ ಹಾಗೂ 3 ರಿಂದ 1 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅದೇ ಅಪರಾಧ ಮುಂದುವರಿದರೇ 20 ಸಾವಿರ ರೂ ದಂಡ ಮತ್ತು 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಶಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಈ ಬಾಲಕ ಕಾರ್ಮಿಕ ಮಸೂದೆಯಲ್ಲಿ ಹಲವಾರು ಹೊಸ ಮಾರ್ಪಾಡುಗಳನ್ನು ಮಾಡಲಾಗಿದೆ. ದಂಡದ ಈ ಹಣವನ್ನು ನಾವು ಪರಿಹಾರ ನಿಧಿಗೆ ನೀಡುತ್ತೇವೆ. ಪ್ರತಿಯೊಂದು ಮಗುವಿಗೆ 15 ಸಾವಿರ ರು ಡೆಪಾಸಿಟ್ ಮಾಡುವುದಾಗಿ ಕಾರ್ಮಿಕ ಸಚಿವ ದತ್ತಾತ್ರೇಯ ತಿಳಿಸಿದ್ದಾರೆ. ಬಾಲ ಕಾರ್ಮಿಕ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತು.
Advertisement