ಹಿಂದುಗಳು ಪೂಜಿಸುವ 'ಗೋವು' ರಕ್ಷಿಸಿ: ಮುಸ್ಲಿಂರಿಗೆ ಅಜ್ಮೀರ್ ದರ್ಗಾ ಧಾರ್ಮಿಕ ಮುಖಂಡನಿಂದ ಕರೆ

ಹಿಂದೂಗಳು ಪೂಜಿಲ್ಪಡುವ ಗೋವುಗಳನ್ನು ರಕ್ಷಿಸಬೇಕು ಎಂದು ಮುಸ್ಲಿಂರಿಗೆ ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ್ ಅಬೆದಿನ್ ಅಲಿ ಖಾನ್ ಮನವಿ ಮಾಡಿದ್ದಾರೆ...
ಅಜ್ಮೀರ್ ದರ್ಗಾ
ಅಜ್ಮೀರ್ ದರ್ಗಾ

ಜೈಪುರ: ಹಿಂದೂಗಳು ಪೂಜಿಲ್ಪಡುವ ಗೋವುಗಳನ್ನು ರಕ್ಷಿಸಬೇಕು ಎಂದು ಮುಸ್ಲಿಂರಿಗೆ ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ್ ಅಬೆದಿನ್ ಅಲಿ ಖಾನ್ ಮನವಿ ಮಾಡಿದ್ದಾರೆ.

ಗೋಮಾಂಸ ವಿಷಯವನ್ನೇ ಇಟ್ಟುಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದು-ಮುಸ್ಲಿಂರ ನಡುವಿನ ಸೌಹಾರ್ದತೆಯನ್ನು ಕದಡುತ್ತಿದ್ದಾರೆ. ಹೀಗಾಗಿ ದೇಶದ ಹಿತಾಸಕ್ತಿಗಾಗಿ ಮುಸ್ಲಿಂರು ಗೋವುಗಳನ್ನು ರಕ್ಷಿಸುವ ಮೂಲಕ ಅದನ್ನು ಮಾದರಿಯಾಗಿ ತೋರಿಸಬೇಕು ಎಂದರು.

ಗೋವು ಹಿಂದುಗಳಿಗೆ ಪವಿತ್ರವಾಗಿದೆ. ಆದರೆ ಗೋಮಾಂಸ ಭಕ್ಷಣೆ ಈಗ ಧರ್ಮದ ಹೊಸ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, ಇದು ದೇಶದ ಘನತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಇತಿಹಾಸದಲ್ಲಿ ಪ್ರವಾದಿ ಮೊಹಮ್ಮದರು ಕೂಡಾ ಗೋ ಮಾಂಸ ಭಕ್ಷಣೆ ವಿರುದ್ಧ ಉಪದೇಶ ನೀಡಿದ್ದರು. ಇನ್ನು ಸೂಫಿ ಸಂತರು ಮತ್ತು ಧಾರ್ಮಿಕ ಮುಖಂಡರು ಗೋಮಾಂಸ ತಿನ್ನುತ್ತಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಜೈನುಲ್ ಅಬೆದಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com