ಸಕಲ ಸರ್ಕಾರಿ ಗೌರವಗಳೊಂದಿಗೆ ಹಿರಿಯ ಲೇಖಕಿ ಮಹಾಶ್ವೇತಾ ದೇವಿ ಅಂತ್ಯಕ್ರಿಯೆ

ಬುಡಕಟ್ಟು ಮತ್ತು ಶೋಷಣೆಗೊಳಗಾದ ಇತರ ಜನರಿಗಾಗಿ ಜೀವನಪರ್ಯಂತ ಹೋರಾಟ ನಡೆಸಿದ್ದ ಲೇಖಕಿ ಮಹಾಶ್ವೇತಾದೇವಿ ಅವರ ಅಂತ್ಯಕ್ರಿಯೆ
ಮಹಾಶ್ವೇತ ದೇವಿ
ಮಹಾಶ್ವೇತ ದೇವಿ
Updated on

ಕೊಲ್ಕೊತಾ: ಬುಡಕಟ್ಟು ಮತ್ತು ಶೋಷಣೆಗೊಳಗಾದ ಇತರ ಜನರಿಗಾಗಿ ಜೀವನಪರ್ಯಂತ ಹೋರಾಟ ನಡೆಸಿದ್ದ ಲೇಖಕಿ ಮಹಾಶ್ವೇತಾದೇವಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕೊಲ್ಕೋತ್ತಾದಲ್ಲಿ ನಡೆಯಿತು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಸಾವಿರಾರು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಅವರು ದೀರ್ಘ ಕಾಲದಿಂದ ಮೂತ್ರಕೋಶ, ಶ್ವಾಸಕೋಶ ಮತ್ತು ಇತರ ವಯೋಸಹಜ ಅನಾರೋಗ್ಯಗಳಿಂದ ಬಳಲುತ್ತಿದ್ದ ಅವರು ಗುರುವಾರ ನಿಧನರಾಗಿದ್ದರು.  ಪದ್ಮವಿಭೂಷಣ, ಮ್ಯಾಗ್ಸೆಸೆ, ಸಾಹಿತ್ಯ ಅಕಾಡೆಮಿ ಮತ್ತು ಜ್ಞಾನಪೀಠ ಸೇರಿ ಅಸಂಖ್ಯ ಪ್ರಶಸ್ತಿಗಳಿಂದ ಪುರಸ್ಕೃತ ರಾಗಿರುವ ಅವರು ಕೃತಿಗಳ ಮೂಲಕ ಮಾತ್ರವಲ್ಲದೆ ಇತರ ಹೋರಾಟಗಳ ಮೂಲಕವೂ ಶೋಷಿತರ ಧ್ವನಿಯಾಗಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com