ಕಾಶ್ಮೀರದಲ್ಲಿ ಈಗ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಕೆಲವು ವಾರಗಳಷ್ಟೇ ಬೇಕು, ಆದರೆ ಮತ್ತೊಂದು ಬುರ್ಹಾನ್ ವನಿ ರೀತಿಯ ಪ್ರಕರಣ ನಡೆದರೆ ಮತ್ತೆ ಇಂತಹ ಗಲಭೆ ಸಂಭವಿಸುತ್ತದೆ. ಆದ್ದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ಕಾಶ್ಮೀರಿ ಯುವಕರಿಗೆ ಕಾಶ್ಮೀರ ಭಾರತದ್ದು ಹಾಗೂ ನಮ್ಮದು ಎಂಬ ಭಾವನೆ ಮೂಡುವಂತೆ ಮಾಡುವುದೇ ದೊಡ್ಡ ಸವಾಲಿನ ಸಂಗತಿ ಎಂದು ಸುಮಿತ್ ಗಂಗೂಲಿ ಹೇಳಿದ್ದಾರೆ.