ನವದೆಹಲಿ: ಸರ್ಕಾರ ನನ್ನನ್ನು ರಕ್ಷಿಸುತ್ತದೆಯೇ? ನನಗೆ ರಕ್ಷಣೆ ಬೇಕು, ನನ್ನ ಜೀವಕ್ಕೆ ಬೆದರಿಕೆಯಿದೆ, ಇದು ತಮಿಳುನಾಡಿನ ಎಡಿಎಂಕೆ ಸಂಸದೆ ಶಶಿಕಲಾ ಪುಷ್ಪಾ ಸೋಮವಾರ ಸಂಸತ್ತಿನಲ್ಲಿ ಕಣ್ಣೀರು ಸುರಿಸಿ ನೀಡಿರುವ ಹೇಳಿಕೆ. ಇದಾದ ಕೆಲವೇ ಹೊತ್ತಿನಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಎಡಿಎಂಕೆ ಘೋಷಿಸಿತ್ತು.