ಇದೊಂದು ಘೋರ ಮತ್ತು ಹೀನ ಕೃತ್ಯವಾಗಿದೆ ಮತ್ತು ಘಟನೆಯಿಂದಾಗಿ ದೇಶದ ಗೌರವಕ್ಕೂ ಧಕ್ಕೆಯಾಗಿದೆ. ಹೀಗಾಗಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲ ದಿನೇಶ್ ಶರ್ಮಾ ಅವರು, ಆರೋಪಿಗಳು ಕೇವಲ 20 ವರ್ಷದವರಾಗಿದ್ದು, ಬಡವರಾಗಿದ್ದಾರೆ. ಹೀಗಾಗಿ ಗರಿಷ್ಠ 20 ಜೈಲು ಶಿಕ್ಷೆ ಸಾಕು ಎಂದು ಮನವಿ ಮಾಡಿದರು,