ಒಬ್ಬ ಬಡ ರೈತನ ಮಗಳಾಗಿರುವ ಸಾವಿತ್ರಿ ಪರಿಶಿಷ್ಟ ಜಾತಿಗೆ ಸೇರಿದ್ದು, ಎರಡು ವರ್ಷಗಳ ಹಿಂದೆ ಪುಸ್ತಕಗಳನ್ನೂ ತೆಗೆಯುವ ಸ್ಥಿತಿಯಲ್ಲಿರಲಿಲ್ಲ. ಕಾರಣ ಬಡತನದಲ್ಲಿ ಓದು ಮುಂದುವರಿಸುವುದು ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ ಆಕೆಗೆ ನೆರವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಕೋಚಿಂಗ್ ಕಲ್ಪಿಸಲು ಚತ್ತೀಸ್ಗಢ ಸರ್ಕಾರದ ಪ್ರಯಾಸ್ ಯೋಜನೆ. ಇದೇ ಯೋಜನೆಯ ಅಡಿಯಲ್ಲಿ ಪ್ರವೇಶ ಪರೀಕ್ಷೆ ಬರೆದು ಪ್ರವೇಶ ಪಡೆದ ಸಾವಿತ್ರಿ ದೇಶವೇ ಗಮನಿಸುವಂತಹ ಸಾಧನೆ ಮಾಡಿದ್ದಾಳೆ.