ಹಾಕಿ ಚ್ಯಾಂಪಿಯನ್ ಟ್ರೋಪಿ: ಸೋತ ಭಾರತ ತಂಡಕ್ಕೆ ಸಮಾಧಾನ ಹೇಳಿದ ಪ್ರಧಾನಿ ಮೋದಿ

ಭಾರತದ ಪುರುಷರ ಹಾಕಿ ತಂಡದ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಪಾರವಾಗಿ ಶ್ಲಾಘನೆ ಮಾಡಿ "ತಂಡದ ಈ ಅದ್ಭುತ ನಿರ್ವಹಣೆ ನಮಗೆಲ್ಲ ಹೆಮ್ಮೆ ತಂದಿದೆ..
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ ತಲುಪಿದ ಐತಿಹಾಸಿಕ ಸಾಧನೆ ಮಾಡಿದ್ದ ಭಾರತ, ಫೈನಲ್‌ ಪಂದ್ಯದಲ್ಲಿ , ಅದ್ಭುತ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯದ ಎದುರು ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ 1-3 ಗೋಲುಗಳ ವಿರೋಚಿತ ಸೋಲನ್ನು ಕಂಡಿದೆ.

ಭಾರತದ ಪುರುಷರ ಹಾಕಿ ತಂಡದ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಪಾರವಾಗಿ ಶ್ಲಾಘನೆ ಮಾಡಿ "ತಂಡದ ಈ ಅದ್ಭುತ ನಿರ್ವಹಣೆ ನಮಗೆಲ್ಲ  ಹೆಮ್ಮೆ ತಂದಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

ಮೂರೂ ಯತ್ನಗಳಲ್ಲಿ ಗೆಲ್ಲುವ ಅವಕಾಶ ಕಳೆದುಕೊಂಡ ಭಾರತ ಅಂತಿಮವಾಗಿ 1-3 ಸೋಲಿನೊಂದಿಗೆ ಬೆಳ್ಳಿಯ ಪದಕಕ್ಕೆ ತೃಪ್ತಿ ಪಡೆಯಬೇಕಾಯಿತು. ಆದರೆ ಪಂದ್ಯದ ಉದ್ದಕ್ಕೂ ಭಾರತೀಯ ಆಟಗಾರರು ನೀಡಿದ ಹೋರಾಟ ರೋಮಾಂಚಕವಾಗಿತ್ತು ಎಂದು ಮೋದಿ ಟ್ವೀಟ್ ಮಾಡುವ ಮೂಲಕ  ಭಾರತ ತಂಡ ಸೋಲಿನ ನೋವನ್ನು ಮರೆಯುವಂತೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com