ಹಾಕಿ ಚ್ಯಾಂಪಿಯನ್ ಟ್ರೋಪಿ: ಸೋತ ಭಾರತ ತಂಡಕ್ಕೆ ಸಮಾಧಾನ ಹೇಳಿದ ಪ್ರಧಾನಿ ಮೋದಿ

ಭಾರತದ ಪುರುಷರ ಹಾಕಿ ತಂಡದ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಪಾರವಾಗಿ ಶ್ಲಾಘನೆ ಮಾಡಿ "ತಂಡದ ಈ ಅದ್ಭುತ ನಿರ್ವಹಣೆ ನಮಗೆಲ್ಲ ಹೆಮ್ಮೆ ತಂದಿದೆ..
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ ತಲುಪಿದ ಐತಿಹಾಸಿಕ ಸಾಧನೆ ಮಾಡಿದ್ದ ಭಾರತ, ಫೈನಲ್‌ ಪಂದ್ಯದಲ್ಲಿ , ಅದ್ಭುತ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯದ ಎದುರು ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ 1-3 ಗೋಲುಗಳ ವಿರೋಚಿತ ಸೋಲನ್ನು ಕಂಡಿದೆ.

ಭಾರತದ ಪುರುಷರ ಹಾಕಿ ತಂಡದ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಪಾರವಾಗಿ ಶ್ಲಾಘನೆ ಮಾಡಿ "ತಂಡದ ಈ ಅದ್ಭುತ ನಿರ್ವಹಣೆ ನಮಗೆಲ್ಲ  ಹೆಮ್ಮೆ ತಂದಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

ಮೂರೂ ಯತ್ನಗಳಲ್ಲಿ ಗೆಲ್ಲುವ ಅವಕಾಶ ಕಳೆದುಕೊಂಡ ಭಾರತ ಅಂತಿಮವಾಗಿ 1-3 ಸೋಲಿನೊಂದಿಗೆ ಬೆಳ್ಳಿಯ ಪದಕಕ್ಕೆ ತೃಪ್ತಿ ಪಡೆಯಬೇಕಾಯಿತು. ಆದರೆ ಪಂದ್ಯದ ಉದ್ದಕ್ಕೂ ಭಾರತೀಯ ಆಟಗಾರರು ನೀಡಿದ ಹೋರಾಟ ರೋಮಾಂಚಕವಾಗಿತ್ತು ಎಂದು ಮೋದಿ ಟ್ವೀಟ್ ಮಾಡುವ ಮೂಲಕ  ಭಾರತ ತಂಡ ಸೋಲಿನ ನೋವನ್ನು ಮರೆಯುವಂತೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com