ವಾಟ್ಸಾಪ್ ನಿಂದ ಭಯೋತ್ಪಾದನೆ ಹೆಚ್ಚಳ: ಬ್ಯಾನ್ ಮಾಡುವಂತೆ ಪಿಐಎಲ್

ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ವೈಬರ್ ಮೆಸೇಜಿಂಗ್ ಆಪ್​ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದು, ಭಯೋತ್ಪಾದನೆಯ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ವೈಬರ್ ಮೆಸೇಜಿಂಗ್ ಆಪ್​ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದು, ಭಯೋತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ಭಾರದಲ್ಲಿ ಇಂತಹ ಮೆಸೇಜಿಂಗ್ ಆಪ್​ಗಳನ್ನು ನಿಷೇಧ ಮಾಡಬೇಕೆಂದು ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಕೋಟ್ಯಾಂತರ ಜನರನ್ನು ಆಕರ್ಷಿಸಿದ್ದ ವಾಟ್ಸ್ ಆಪ್ ಭಯೋತ್ಪಾದನಾ ಚಟುವಟಿಕೆಗಳಿಗೂ ನೆರವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಹರಿಯಾಣ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಸುಧೀರ್ ಯಾದವ್ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದಾರೆ.

ವಾಟ್ಸ್ ಆಪ್​ನ ರಹಸ್ಯಲಿಪಿ ಸೌಲಭ್ಯ ಬಳೆಸಿಕೊಂಡು ಕ್ರಿಮಿನಲ್ಸ್ ಹಾಗೂ ಭಯೋತ್ಪಾದಕರು ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇಬ್ಬರು ನಡೆಸಿದ ಮಾತುಕತೆ ಮೂರನೇ ವ್ಯಕ್ತಿಗೆ ದೊರೆಯುವುದಿಲ್ಲ. ಭಯೋತ್ಪಾದಕರು ಸೆರೆ ಸಿಕ್ಕರು ಕಂಪನಿಗಳು ಮಾಹಿತಿ ನೀಡಲು ನಿರಾಕರಿಸುತ್ತವೆ.

265 ಬಿಟ್ ಸಾಮರ್ಥ್ಯದ ರಹಸ್ಯ ಲಿಪಿಯನ್ನು ಭೇದಿಸಲು ಸೂಪರ್ ಕಂಪ್ಯೂಟರ್​ಗಳಿಗೆ ನೂರಾರು ವರ್ಷಗಳು ಬೇಕಾಗುತ್ತವೆ. ಇಂತಹ ಬೆಳವಣಿಗೆಗಳು ಸಂಭಾವ್ಯದಲ್ಲಿ ದೇಶದ ಭದ್ರತೆಗೆ ಅಪಾಯ ಉಂಟು ಮಾಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಈ ಸಂಬಂಧ ಜೂನ್ 29ರಂದು ನ್ಯಾಯಪೀಠ ಪ್ರಕರಣ ಅರ್ಜಿ ವಿಚಾರಣೆ ನಡೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com