ವೆನೆಜುವೆಲಾದಲ್ಲಿ ಭಾರತೀಯ ಮೂಲದ ಉದ್ಯಮಿ ಕೊಲೆ

ವೆನೆಜುಲೆಲಾದಲ್ಲಿ ಕಳೆದ ಒಂದು ವಾರದಿಂದ ಕಣ್ಮರೆಯಾಗಿದ್ದ ಕೇರಳದ ಕಾಸರಗೋಡು ಮೂಲದ ಕುಮಾರ ಪ್ರಸಾದ್ ತನ್ನ ಸಹ ಉದ್ಯೋಗಿಯೊಂದಿಗೆ...
ಕುಮಾರ ಪ್ರಸಾದ್
ಕುಮಾರ ಪ್ರಸಾದ್

ಕಾಸರಗೋಡು: ವೆನೆಜುಲೆಲಾದಲ್ಲಿ ಕಳೆದ ಒಂದು ವಾರದಿಂದ ಕಣ್ಮರೆಯಾಗಿದ್ದ ಕೇರಳದ ಕಾಸರಗೋಡು ಮೂಲದ ಕುಮಾರ ಪ್ರಸಾದ್ ತನ್ನ ಸಹ ಉದ್ಯೋಗಿಯೊಂದಿಗೆ ಕೊಲೆಯಾಗಿದ್ದಾರೆ ಎಂದು ಕುಟುಂಬ ವರ್ಗ ತಿಳಿಸಿದೆ.

ವೆನೆಜುವೆಲಾದ ರಾಜಧಾನಿ ಕುಮನದಲ್ಲಿ ಆಯುರ್ ವೇದ ಆಸ್ಪತ್ರೆ ಹಾಗೂ ಔಷಧಿ ಪ್ಲಾಂಟ್ ನಡೆಸುತ್ತಿದ್ದ 41 ವರ್ಷದ ಪ್ರಸಾದ್ ಹಾಗೂ ಸಹ ಉದ್ಯೋಗಿಯಾಗಿ ಎರಿಕಾ ಮಾರಿಯಾ ಅವರ ಮೃತದೇಹ ಆಸ್ಪತ್ರೆಯ ಬಳಿ ಪತ್ತೆಯಾಗಿವೆ ಎಂದು ವೆಂಕಿಟಕೃಷ್ಣ ಭಟ್ ಹೇಳಿದ್ದಾರೆ.

ಪ್ರಸಾದ್ ಕಳೆದ ಒಂದು ವಾರದಿಂದ ಕಣ್ಮರೆಯಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ಉಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ವೆಂಕಿಟಕೃಷ್ಣನ್ ಕುಮನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶನಿವಾರ ಸಂಜೆ ಪ್ರಸಾದ್ ಮೃತದೇಹ ಪತ್ತೆಯಾಗಿದ್ದು ದೇಹದ ಮೇಲೆ ಗುಂಡಿನ ಗಾಯಗಳಾಗಿವೆಂದು ಕುಟುಂಬಸ್ಥರಿಗೆ ಫೋನಿನ ಮೂಲಕ ವೆಂಕಿಟಕೃಷ್ಣನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com