ಜಮ್ಮು: ಜುಲೈ.2 ರಿಂದ ಜಮ್ಮು-ಕಾಶ್ಮೀರದಲ್ಲಿ ಅಮರನಾಥ್ ಯಾತ್ರೆ ಪ್ರಾರಂಭವಾಗಲಿದ್ದು, 1,138 ಯಾತ್ರಾರ್ಥಿಗಳ ಮೊದಲ ತಂಡ ಜಮ್ಮುಗೆ ಹೊರಟಿದೆ.
ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್, ಲೋಕಸಭಾ ಸದಸ್ಯ ಜುಗಲ್ ಕಿಶೋರ್, ಕಿರಿಯ ಸಚಿವರಾದ ಪ್ರಿಯಾ ಸೇಥಿ, ಅಮರನಾಥ್ ಯಾತ್ರೆಗೆ ಯಾತ್ರಾರ್ಥಿಗಳ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ. ಮೊದಲ ತಂಡದಲ್ಲಿ ತೆರಳಿರುವ 1,138 ಯಾತ್ರಾರ್ಥಿಗಳ ಪೈಕಿ 225 ಮಹಿಳೆಯರು, 900 ಪುರುಷರು, 13 ಮಕ್ಕಳು ತೆರಳಿದ್ದಾರೆ. ಅಮರನಾಥ ಯಾತ್ರೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಜುಲೈ.2 ರಂದು ಅಮರನಾಥ ಗುಹೆಯಲ್ಲಿ ಶಿವನ ಲಿಂಗದ ದರ್ಶನ ಪಡೆಯಲಿದ್ದಾರೆ.
Advertisement