‘ನಮಗೆ ನ್ಯಾಯಾಂಗದಲ್ಲಿ ವಿಶ್ವಾಸ ಇದೆ. ಆದರೆ ‘ತ್ವರಿತ’ ನ್ಯಾಯ ಲಭಿಸಬೇಕು ಎಂದು ಶರ್ಮಾ ಶನಿವಾರ ಹೇಳಿದ್ದಾರೆ. ‘ದೇಶದ್ರೋಹಿ ಸಾಯಬೇಕು. ಆತ ತಾಯಿ ಭಾರತಾಂಬೆಯನ್ನು ಅವಮಾನಿಸಿದ್ದಾನೆ ಮತ್ತು ರಾಷ್ಟ್ರವಿರೋಧಿ ಘೋಷಣೆ ಗಳನ್ನು ಕೂಗಿದ್ದಾನೆ. ನಮಗೆ ನ್ಯಾಯಾಲಯಗಳಲ್ಲಿ ವಿಶ್ವಾಸವಿದೆ. ಆದರೆ ತೀರ್ಪು ಬರಲು ದೀರ್ಘ ಸಮಯ ಹಿಡಿಯುತ್ತದೆ. ತ್ವರಿತ ನಿರ್ಧಾರ ಆಗಬೇಕು ಎಂದು ನಾವು ಬಯಸುತ್ತೇವೆ. ಆದ್ದರಿಂದ ಆತನನ್ನು ಗುಂಡಿಕ್ಕಿ ಹತ್ಯೆ ಮಾಡುವವರಿಗೆ ನಾವು 11 ಲಕ್ಷ ರುಪಾಯಿ ಬಹುಮಾನ ಘೋಷಿಸಿ ದ್ದೇವೆ’ ಎಂದು ಶರ್ಮಾ ಹೇಳಿದ್ದಾರೆ.