2014ರ ಜೂನ್ ನಲ್ಲಿ ಪಂಜಾಬ್ ಮೂಲದ 40 ಕಾರ್ಮಿಕರನ್ನು ಐಎಸ್ಐಎಸ್ ಉಗ್ರರು ಅಪಹರಿಸಿದ್ದರು. ಆ ಪೈಕಿ ತಪ್ಪಿಸಿಕೊಂಡು ಬಂದಿದ್ದ ಒಬ್ಬ ವ್ಯಕ್ತಿ, ಉಳಿದವರನ್ನು ಉಗ್ರರು ಕೊಂದಿರುವ ಸಾಧ್ಯತೆ ಇದೆ ಎಂದು ಹೇಳಿದ್ದ. ಆದರೆ ಆತನ ಹೇಳಿಕೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು, ತಪ್ಪಿಸಿಕೊಂಡು ಬಂದಿರುವ ವ್ಯಕ್ತಿಯ ಹೇಳಿಕೆಯನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.