ಗೋಮಾಂಸ ನಿಷೇಧದ ಬಗ್ಗೆ ಮಾತನಾಡಿ ನೌಕರಿ ಕಳೆದು ಕೊಳ್ಳಲು ಇಷ್ಟವಿಲ್ಲ

ಗೋಮಾಂಸ ನಿಷೇಧ ಕುರಿತ ಪ್ರಶ್ನೆಗೆ ಹೇಳಿಕೆ ನೀಡಿ ತನ್ನ ನೌಕರಿ ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್‌ ...
ಅರವಿಂದ್ ಸುಬ್ರಮಣಿಯನ್‌
ಅರವಿಂದ್ ಸುಬ್ರಮಣಿಯನ್‌

ಮುಂಬಯಿ: ಗೋಮಾಂಸ ನಿಷೇಧ ಕುರಿತ ಪ್ರಶ್ನೆಗೆ ಹೇಳಿಕೆ ನೀಡಿ ತನ್ನ ನೌಕರಿ ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್‌ ಹೇಳಿದ್ದಾರೆ.

ಮುಂಬೈ ವಿಶ್ವವಿದ್ಯಾಲಯಲ್ಲಿ ವಿದ್ಯಾರ್ಥಿಗಳೊಟ್ಟಿನ ಸಂವಾದದ ವೇಳೆ ಸುಬ್ರಮಣಿಯನ್‌ ಅವರಿಗೆ ಗೋಮಾಂಸ ನಿಷೇಧ ನಡೆ ರೈತರ ಆದಾಯ ಅಥವಾ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಉತ್ತರಿಸಿದ ಅವರು, ನಿಮಗೆ ಗೊತ್ತಾ, ನಾನು ಈ ಪ್ರಶ್ನೆಗೆ ಉತ್ತರಿಸಿದರೆ, ನನ್ನ ಉದ್ಯೋಗ ಕಳೆದುಕೊಳ್ಳುತ್ತೇನೆ. ಆದರೆ,  ಈ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು’ ಎಂದು ಹೇಳಿದರು.  

ಇತ್ತೀಚೆಗೆ ಸಾಮಾಜಿಕ ಒಡಕು ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಅವರು ನಾನು ಉದ್ಯೋಗ ಕಳೆದುಕೊಳ್ಳಲು ಬಯಸಲ್ಲ ಎನ್ನುವ ಮೂಲಕ ಗೋಮಾಂಸ ನಿಷೇಧ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com