ವಿಜಯಮಲ್ಯ ದೇಶ ತೊರೆಯಲು ಕೇಂದ್ರದ ಸಹಕಾರ: ಕಾಂಗ್ರೆಸ್ ಗಂಭೀರ ಆರೋಪ

ಬಹುಕೋಟಿ ರು. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ಹಾಗೂ ರಾಜ್ಯಸಭೆ ಸದಸ್ಯ ವಿಜಯ್ ಮಲ್ಯ ಪ್ರಕರಣ ಸಂಸತ್ತಿನಲ್ಲಿ ಕೋಲಾಹಲವನ್ನೇ ..
ವಿಜಯ ಮಲ್ಯ
ವಿಜಯ ಮಲ್ಯ

ನವದೆಹಲಿ: ಬಹುಕೋಟಿ ರು. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ಹಾಗೂ ರಾಜ್ಯಸಭೆ ಸದಸ್ಯ ವಿಜಯ್ ಮಲ್ಯ ಪ್ರಕರಣ ಸಂಸತ್ತಿನಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.

ವಿಜಯಮಲ್ಯಗೆ ಯಾರು ಅಷ್ಟೊಂದು ಪ್ರಮಾಣದ ಸಾಲ ಕೊಟ್ಟರು ಎಂಬುದು ಪ್ರಶ್ನೆಯಲ್ಲ. ಅವರು ಭಾರತ ಬಿಟ್ಟು ವಿದೇಶಕ್ಕೆ ತೆರಳಿದ್ದು ಹೇಗೆ, ಇದಕ್ಕೆ ಸಹಾಯ ಮಾಡಿದವರು ಯಾರು ಎಂಬುದು ಈಗ ಚರ್ಚಿಸಬೇಕಾದ ವಿಷಯ ಎಂದು ಕಾಂಗ್ರೆಸ್ ಸದಸ್ಯ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಮಲ್ಯ ದೇಶ ಬಿಟ್ಟು ಹೋಗದಂತೆ ತಡೆಯಲು ಕೇಸು ದಾಖಲಿಸುವಂತೆ ವಕೀಲರು ಈ ಹಿಂದೆಯೇ ಹೇಳಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಸರ್ಕಾರ ಮಾರ್ಚ್ 5 ರಂದು ಕೇಸು ದಾಖಲಿಸಿದೆ ಎಂದು ಜೈರಾಮ್ ರಮೇಶ್ ರಾಜ್ಯ ಸಭೆಯಲ್ಲಿ ಹೇಳಿದ್ದಾರೆ.

ಮಲ್ಯ ದೇಶ ಬಿಟ್ಟು ವಿದೇಶಕ್ಕೆ ತೆರಳು ಸಹಾಯವಾಗುವಂತೆ ಕೇಂದ್ರ ಸರ್ಕಾರ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com