ನಮ್ಮಲ್ಲಿರುವ ಪ್ರಸ್ತುತ ನಿಯಮದ ಪ್ರಕಾರ ಅದು ಉದ್ಯೋಗಿಗಳ ಹಿತವನ್ನು ಕಾಪಾಡಬೇಕಿತ್ತು. ಆದರೆ ನಮಗೆ ಕೆಲಸ ಮಾಡಿದ್ದಕ್ಕೆ ಸಂಬಳ ಸಿಕ್ಕಿಲ್ಲ. ಅಷ್ಟೇ ಅಲ್ಲ ಇದರ ವಿರುದ್ಧ ನ್ಯಾಯಾಂಗ ಹೋರಾಟ ಮಾಡಲು ಹೋದರೂ, ಶುಲ್ಕ ಪಾವತಿ ಮಾಡುವಷ್ಟೂ ದುಡ್ಡು ಈ ನೌಕರರ ಕೈಯಲ್ಲಿ ಇಲ್ಲ. ಇನ್ನೂ ಕೆಲವರು ತಮಗೆ ಸಿಗಬೇಕಾಗಿದ್ದ ಹಣಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.