ಆರ್ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗತ್ ಅವರು, ಹೊಸ ತಲೆಮಾರು ಮದರ್ ಇಂಡಿಯಾ ಎಂದು ಒಟ್ಟಾಗಿ ಘೋಷಣೆ ಕೂಗುವ ಅಗತ್ಯ ಇದೆ ಎಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಲಾತೂರ್ ಜಿಲ್ಲೆಯ ಉದ್ಗಿರ್ ತೆಹ್ಸಿಲ್ ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಓವೈಸಿ, 'ನಾನು ಆ ಘೋಷಣೆ ಕೂಗಲ್ಲ ಅಂದ್ರೆ ನೀವು ಏನ್ ಮಾಡುತ್ತೀರಿ ಭಾಗವತ್ ಸಾಹೇಬ್' ಎಂದು ಪ್ರಶ್ನಿಸಿದ್ದಾರೆ.