ಕುದುರೆ ಮೇಲೆ ಹಲ್ಲೆ: ತಪ್ಪು ಸಾಬೀತಾದರೆ ದಂಡ ತೆರಲು ಸಿದ್ಧ; ಶಾಸಕ ಗಣೇಶ್ ಜೋಶಿ

ಪೊಲೀಸ್ ಕುದುರೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಸಾಬೀತಾದರೆ ಯಾವುದೇ ದಂಡ ತೆರಲು ಸಿದ್ಧ ಎಂದು ಬಿಜೆಪಿ ಶಾಸಕ ಗಣೇಶ್ ಜೋಶಿ...
ಗಣೇಶ್ ಜೋಶಿ
ಗಣೇಶ್ ಜೋಶಿ

ಡೆಹ್ರಾಡೂನ್: ಪೊಲೀಸ್ ಕುದುರೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಸಾಬೀತಾದರೆ ಯಾವುದೇ ದಂಡ ತೆರಲು ಸಿದ್ಧ ಎಂದು ಬಿಜೆಪಿ ಶಾಸಕ ಗಣೇಶ್ ಜೋಶಿ ಹೇಳಿದ್ದಾರೆ.

ಇದು ದುರಾದೃಷ್ಟಕರ. ಅಮಾಯಕ ಪ್ರಾಣಿಗೆ ನೊಯಿಸಿರುವುದು ಸೂಕ್ಷ್ಮ ಸಮಸ್ಯೆಯಾಗಿದ್ದು ಇದು ತಪ್ಪು. ಆದರೆ ಮಾಧ್ಯಮಗಳು ವಿಡಿಯೋವನ್ನು ತಿರುಚಿ ಟಿಆರ್ ಪಿಗಾಗಿ ನಕಲಿ ವಿಡಿಯೋವನ್ನು ಪ್ರಸಾರ ಮಾಡುತ್ತೀವೆ. ಒಂದು ವೇಳೆ ನಾನ್ನ ತಪ್ಪು ಸಾಬೀತಾದರೆ ಯಾವುದೇ ರೀತಿಯ ದಂಡ ತೆರಲು ಸಿದ್ದ ಎಂದು ಹೇಳಿದ್ದಾರೆ.

ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿರುವ ಗಣೇಶ್ ಜೋಶಿ ನನ್ನ ವಿರುದ್ಧ ರಾಜಕೀಯವಾಗಿ ಪಿತ್ತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕುದುರೆಗೆ ಹೊಡೆಯುತ್ತಿರುವ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಶಾಸಕನ ಈ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಹಲವು ಪ್ರಾಣಿ ದಯಾ ಸಂಘಟನೆಯ ಕಾರ್ಯಕರ್ತರು ಶಾಸಕರ ವಿರುದ್ಧ ದೂರು ದಾಖಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com