ಚಾಲಕ್ಕುಡಿ (ಕೇರಳ): ಮಾರ್ಚ್ 6 ರಂದು ಕೊಚ್ಚಿಯಲ್ಲಿ ಸಾವಿಗೀಡಾದ ಮಲಯಾಳಂ ನಟ ಕಲಾಭವನ ಮಣಿ ಸಾವಿಗೆ ಸಂಬಂಧಿಸಿದಂತೆ ಹಲವು ನಿಗೂಢ ರಹಸ್ಯಗಳು ಬಯಲಾಗತೊಡಗಿವೆ. ಈ ಹಿಂದೆ ಕಲಾಭವನ ಮಣಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಣಿಯ ದೇಹದಲ್ಲಿ ಕೀಟನಾಶಕ, ಎಥೆನಾಲ್ ಮತ್ತು ಮೆಥನಾಲ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.