ಉತ್ತರಾಖಂಡ್ ಪೊಲೀಸ್ ಪಡೆಯಲ್ಲಿರುವ ಶಕ್ತಿಮಾನ್ನ ಕಾಲಿನಲ್ಲಿ ರಕ್ತ ಸಂಚಾರ ಸ್ಥಗಿತಗೊಂಡ ಕಾರಣ ಗುರುವಾರ ರಾತ್ರಿ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲಾಗಿತ್ತು. ಕಾಲಿನಲ್ಲಿ ಗಾಯ ದೊಡ್ಡದಾಗಿದ್ದು, ಶುಕ್ರವಾರಕ್ಕೆ ಮುನ್ನ ಕಾಲು ತುಂಡರಿಸಿ ತೆಗೆಯದೇ ಇರುತ್ತಿದ್ದರೆ ಕುದುರೆ ಸಾವನ್ನಪ್ಪುತ್ತಿತ್ತು. ಕುದುರೆಯ ಪ್ರಾಣವನ್ನು ರಕ್ಷಿಸುವ ಸಲುವಾಗಿ ಅದರ ಕಾಲು ತುಂಡರಿಸಿ ಕೃತಕ ಕಾಲಿನ ಜೋಡಣೆ ಮಾಡಲಾಗಿದೆ. ಇದೀಗ ಕುದುರೆ ಆಹಾರ ಸೇವಿಸುವಷ್ಟು ಶಕ್ತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.