ನವದೆಹಲಿ: ಸರ್ಕಾರದ ಜಾಹೀರಾತುಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿ, ಗವರ್ನರ್, ಸಚಿವರು , ಪಿಎಂ, ರಾಷ್ಟ್ರಪತಿ, ಹಾಗೂ ಕೇಂದ್ರ ಸಚಿವರುಗಳ ಭಾವಚಿತ್ರಗಳನ್ನು ಹಾಕಲು ಸುಪ್ರೀಂ ಸಮ್ಮತಿಸಿದೆ.
ಈ ಹಿಂದೆ ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯ ನ್ಯಾಯಮೂರ್ತಿ, ರಾಷ್ಟ್ರಪತಿ, ಪ್ರಧಾನ ಮಂತ್ರಿಗಳ ಭಾವಚಿತ್ರ ಮಾತ್ರ ಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.
ಆದರೆ ಮುಂಬರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಪ್ರೀಂ ಗೆ ಮೇಲ್ಮನವಿ ಸಲ್ಲಿಸಿದ್ದವು.
ಅರ್ಜಯ ವಿಚಾರಣೆ ನಡೆಸಿದ ರಂಜನ್ ಗಗೊಯ್ ಮತ್ತು ಪಿ.ಸಿ ಘೋಷ್ ಅವರಿದ್ದ ನ್ಯಾಯಪೀಠ, ಸರ್ಕಾರಿ ಜಾಹೀರಾತುಗಳಲ್ಲಿ, ಸಚಿವರ, ಮುಖ್ಯಮಂತ್ರಿಗಳ, ಕೇಂದ್ರ ಸಚಿವರುಗಳ ಭಾವ ಚಿತರ ಪ್ರಕಟಿಸಲು ಅನುಮತಿ ನೀಡಿದೆ.
Advertisement