ನಿಜಾಮಾಬಾದ್‌ನಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆ ಬೆಂಕಿಗಾಹುತಿ

ತೆಲಂಗಾಣದ ನಿಜಾಮಾಬಾದ್‌ನಲ್ಲಿರುವ ಗೋಪನ್‌ಪಳ್ಳಿ ಗ್ರಾಮದಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆಯೊಂದಕ್ಕೆ ದುರ್ಷರ್ಮಿಗಳು ಬೆಂಕಿ ಹಚ್ಚಿದ...
ಬೆಂಕಿಗಾಹುತಿಯಾದ ಪ್ರಾರ್ಥನಾ ಕೋಣೆ ( ಕೃಪೆ ಎಎನ್ಐ)
ಬೆಂಕಿಗಾಹುತಿಯಾದ ಪ್ರಾರ್ಥನಾ ಕೋಣೆ ( ಕೃಪೆ ಎಎನ್ಐ)
ನಿಜಾಮಾಬಾದ್: ತೆಲಂಗಾಣದ ನಿಜಾಮಾಬಾದ್‌ನಲ್ಲಿರುವ ಗೋಪನ್‌ಪಳ್ಳಿ ಗ್ರಾಮದಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆಯೊಂದಕ್ಕೆ ದುರ್ಷರ್ಮಿಗಳು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಆ ಗ್ರಾಮದಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆಯನ್ನು ನಿರ್ಮಿಸುವುದಕ್ಕೆ ಸ್ಥಳೀಯರು ವಿರೋಧ ಸೂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಆಗಂತುಕರು ಕೋಣೆಗೆ ಬೆಂಕಿ ಹಚ್ಚಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದಿದ್ದಾರೆ ಪೊಲೀಸರು.
ಈ ಹಿಂದೆ ಹಿಂದುಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಯತ್ನಿಸಿದ್ದ ಸ್ಥಳೀಯ ಪಾದ್ರಿಗೆ ಹಿಂದೂ ಸಂಘಟನೆಯ 40 ಮಂದಿಯ ಗುಂಪು ಥಳಿಸಿತ್ತು. 
ಈ ವೈಷಮ್ಯವೇ ಮುಂದುವರಿದು ಪ್ರಾರ್ಥನಾ ಕೋಣೆಗೆ ಬೆಂಕಿ ಹಚ್ಚಲು ಕಾರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com