ನಿಜಾಮಾಬಾದ್‌ನಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆ ಬೆಂಕಿಗಾಹುತಿ

ತೆಲಂಗಾಣದ ನಿಜಾಮಾಬಾದ್‌ನಲ್ಲಿರುವ ಗೋಪನ್‌ಪಳ್ಳಿ ಗ್ರಾಮದಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆಯೊಂದಕ್ಕೆ ದುರ್ಷರ್ಮಿಗಳು ಬೆಂಕಿ ಹಚ್ಚಿದ...
ಬೆಂಕಿಗಾಹುತಿಯಾದ ಪ್ರಾರ್ಥನಾ ಕೋಣೆ ( ಕೃಪೆ ಎಎನ್ಐ)
ಬೆಂಕಿಗಾಹುತಿಯಾದ ಪ್ರಾರ್ಥನಾ ಕೋಣೆ ( ಕೃಪೆ ಎಎನ್ಐ)
Updated on
ನಿಜಾಮಾಬಾದ್: ತೆಲಂಗಾಣದ ನಿಜಾಮಾಬಾದ್‌ನಲ್ಲಿರುವ ಗೋಪನ್‌ಪಳ್ಳಿ ಗ್ರಾಮದಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆಯೊಂದಕ್ಕೆ ದುರ್ಷರ್ಮಿಗಳು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಆ ಗ್ರಾಮದಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆಯನ್ನು ನಿರ್ಮಿಸುವುದಕ್ಕೆ ಸ್ಥಳೀಯರು ವಿರೋಧ ಸೂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಆಗಂತುಕರು ಕೋಣೆಗೆ ಬೆಂಕಿ ಹಚ್ಚಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದಿದ್ದಾರೆ ಪೊಲೀಸರು.
ಈ ಹಿಂದೆ ಹಿಂದುಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಯತ್ನಿಸಿದ್ದ ಸ್ಥಳೀಯ ಪಾದ್ರಿಗೆ ಹಿಂದೂ ಸಂಘಟನೆಯ 40 ಮಂದಿಯ ಗುಂಪು ಥಳಿಸಿತ್ತು. 
ಈ ವೈಷಮ್ಯವೇ ಮುಂದುವರಿದು ಪ್ರಾರ್ಥನಾ ಕೋಣೆಗೆ ಬೆಂಕಿ ಹಚ್ಚಲು ಕಾರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com