ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಭವನದ ಶಿಲನ್ಯಾಸ ಮಾಡಿದ ನಂತರ ಮಾತನಾಡಿದ ಅವರು, ವಾಜಪೇಯಿ ಅವರು ಪ್ರಧಾನಿಯಾದಾಗಲೂ ಇದೇ ರೀತಿ ಆರೋಪಗಳನ್ನು ಮಾಡಲಾಗುತ್ತಿತ್ತು. ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಮೀಸಲಾತಿಯನ್ನು ತೆಗೆದುಹಾಕಿಲ್ಲ. ಬಿಜೆಪಿ ಅಧಿಕಾರಿಕ್ಕೆ ಬಂದರೆ, ದಲಿತರ ಮೀಸಲಾತಿ ತೆಗೆದುಹಾಕಲಾಗುತ್ತದೆ ಎಂದು ಸುಳ್ಳು ಆರೋಪಗಳನ್ನು ಅಂದಿನಿಂದ ಇಂದಿನವರೆಗೆ ಮಾಡುತ್ತಾ ಬರಲಾಗುತ್ತಿದೆ.