ಭಗತ್ ಸಿಂಗ್‌. ರಾಜಗುರು, ಸುಖದೇವ್ ಗೆ ಪ್ರಧಾನಿ ಮೋದಿ ನಮನ

ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್‌, ರಾಜಗುರು ಹಾಗೂ ಸುಖದೇವ್ ಸ್ಮರಣೆಯಲ್ಲಿ ಇಂದು ಹುತಾತ್ಮರ ದಿನ ಆಚರಿಸಲಾಯಿತು. ....
ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಮೋದಿ ನಮನ
ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಮೋದಿ ನಮನ
Updated on

ನವದೆಹಲಿ:  ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್‌, ರಾಜಗುರು ಹಾಗೂ ಸುಖದೇವ್ ಸ್ಮರಣೆಯಲ್ಲಿ ಇಂದು ಹುತಾತ್ಮರ ದಿನ ಆಚರಿಸಲಾಯಿತು. .

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಗತ್ ಸಿಂಗ್‌, ರಾಜಗುರು ಹಾಗೂ ಸುಖದೇವ್ ಅವರಿಗೆ  ಗೌರವ ನಮನ ಸಲ್ಲಿಸಿದರು. ನವದೆಹಲಿಯಲ್ಲಿನ  ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಪುಷ್ಪ ಗುಚ್ಚ ಅರ್ಪಿಸಿ ನಮನ ಸಲ್ಲಿಸಿದರು.

ಇದೇ ವೇಳೆ ಟ್ಟೀಟ್‌ ಮಾಡಿರುವ ಪ್ರಧಾನಿ ಮೋದಿ ಮೂವರು ದೇಶಭಕ್ತರ  ಶೌರ್ಯ ಹಾಗೂ ದೇಶಭಕ್ತಿ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಟ್ವಿಟರ್‌‌‌ನಲ್ಲಿ ಹೇಳಿದ್ದಾರೆ.
ಈ ಮೂವರ ತ್ಯಾಗ, ಬಲಿದಾನದಿಂದ ಮುಂದಿನ ಪೀಳಿಗೆಗೆ ಉಸಿರಾಡುವ ಸ್ವತಂತ್ರ್ಯ ದೊರೆಯಿತು. ಈ ಮೂರು ದೇಶ ಭಕ್ತರ, ಆದರ್ಶ, ಹೋರಾಟದ ಗುಣಗಳು ಎಲ್ಲರಿಗೂ ಮಾದರಿಯಾಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com