ಬಿಜೆಪಿಯ ಸಿಎಂ ಅಭ್ಯರ್ಥಿ ಕೊಲೆ ಪ್ರಕರಣದಲ್ಲಿ ಭಾಗಿ: ಉಲ್ಫಾ ಸಂಘಟನೆ

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದಾ ಸೊನೊವಾಲ್ ಅವರು ಕೊಲೆ...
ಸರ್ಬಾನಂದಾ ಸೊನೊವಾಲ್
ಸರ್ಬಾನಂದಾ ಸೊನೊವಾಲ್
ಗುವಾಹಟಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದಾ ಸೊನೊವಾಲ್ ಅವರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಉಲ್ಫಾ ಸಂಘಟನೆ ಆರೋಪಿಸಿದೆ.
ಅಸ್ಸಾಂ ವಿಧಾನಸಬೆಯ ಮೊದಲ ಹಂತದ ಚುನಾವಣೆಯಲ್ಲಿ ಸರ್ಬಾನಂದಾ ಸೊನೊವಾಲ್ ಅವರು ಸಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಲ್ಫಾ ಸಂಘಟನೆ, ಸರ್ಬಾನಂದಾ ಅವರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳನ್ನು ಕೊಲೆ ಮಾಡಲು ಉಲ್ಫಾ ಕಾರ್ಯಕರ್ತರನ್ನು ಬಳಿಸಿಕೊಂಡಿದ್ದರು ಎಂದು ಉಲ್ಫಾ ದೂರಿದೆ.
ಸೊನೊವಾಲ್ ಅವರು ಉಲ್ಫಾ ಕಾರ್ಯಕರ್ತರ ಜತೆ ಸಂಪರ್ಕ ಹೊಂದಿದ್ದಾಗ, ಅಸ್ಸಾಂ ವಿದ್ಯಾರ್ಥಿ ಒಕ್ಕೂಟಕ್ಕೆ ಆಯ್ಕೆಯಾಗಲು ಉಲ್ಫಾ ನೆರವು ಪಡೆದಿದ್ದರು ಎಂದು ಆರೋಪಿಸಿರುವ ಉಲ್ಘಾ ಸಂಘಟನೆಯ ಪ್ರಚಾರ ಕಾರ್ಯದರ್ಶಿ ಅರುಣೋದಯಿ, ಬಿಜೆಪಿ ಪಕ್ಷದ ಚುನಾವಣಾ ಕಾರ್ಯತಂತ್ರ ನಿರೂಪಕ ಹಿಮಂತಾ ಬಿಸ್ವಾ ಶರ್ಮಾ ಕೂಡ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com