ಮಲಾಲಾಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ದು ರಾಜಕೀಯ ಪ್ರೇರಿತ: ಶ್ರೀ ರವಿಶಂಕರ್ ಗುರೂಜಿ

ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷ ಣ ಪ್ರತಿಪಾದಕಿ ಮಲಾಲಾಗೆ ನೊಬೆಲ್ ಪ್ರಶಸ್ತಿ ನೀಡಿದ್ದಕ್ಕೆ ನನ್ನ ಪ್ರಬಲ ವಿರೋಧವಿದೆ. ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿದ್ದು ಕೂಡ ರಾಜಕೀಯ...
ಮಲಾಲಾ ಮತ್ತು ರವಿಶಂಕರ್ ಗುರೂಜಿ
ಮಲಾಲಾ ಮತ್ತು ರವಿಶಂಕರ್ ಗುರೂಜಿ

ಮುಂಬಯಿ: ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷ ಣ ಪ್ರತಿಪಾದಕಿ ಮಲಾಲಾಗೆ ನೊಬೆಲ್ ಪ್ರಶಸ್ತಿ ನೀಡಿದ್ದಕ್ಕೆ ನನ್ನ ಪ್ರಬಲ ವಿರೋಧವಿದೆ. ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿದ್ದು ಕೂಡ ರಾಜಕೀಯ ಪ್ರೇರೇಪಿತ ಇದರಿಂದ ಯಾವುದೇ ಪ್ರಯೋಜನ ಇಲ್ಲ, ಎಂದು ಶ್ರೀ ರವಿಶಂಕರ್ ಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳಲ್ಲಿ ರೈತಾಪಿ ವರ್ಗಕ್ಕೆ ನೆರವು ನೀಡುತ್ತಿರುವ ಶ್ರೀ ರವಿಶಂಕರ್ ಗುರೂಜಿ ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ನೊಬೆಲ್‌ ಶಾಂತಿ ಪುರಸ್ಕಾರವನ್ನು ತಾವು ಈ ಹಿಂದೆ ತಿರಸ್ಕರಿಸಿದ್ದಾಗಿ ಹೇಳಿರುವ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರು, ತಾವು ಯಾವುದೇ ಪ್ರಶಸ್ತಿ-ಪುರಸ್ಕಾರಗಳಿಗಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಒಮ್ಮೆ ನನಗೆ ನೋಬೆಲ್‌ ಪುರಸ್ಕಾರ ನೀಡುವ ಪ್ರಸ್ತಾಪ ಬಂದಿತ್ತು. ಆದರೆ, ನಾನೇ ಅದನ್ನು ತಿರಸ್ಕರಿಸಿದ್ದೆ. ನಾನು ಕೆಲಸದಲ್ಲಿ ನಂಬಿಕೆ ಇಟ್ಟವನು, ಪ್ರಶಸ್ತಿಯಲ್ಲಲ್ಲ. ಯಾರೂ ಇಂತಹ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಯೋಗ್ಯರಿರುತ್ತಾರೊ ನಾವು ಅಂಥವರನ್ನು ಗೌರವಿಸಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com