ಫೆಬ್ರವರಿ 9 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಕೆಲವು ವಿದ್ಯಾರ್ಥಿಗಳ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿರುವುದನ್ನು ವಿರೋಧಿಸಿ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಮತ್ತು ಇತರ ವಿದ್ಯಾರ್ಥಿಗಳು ಏಪ್ರಿಲ್ 29ರಿಂದ ಅನಿರ್ದಿಷ್ಟಾವಧಿ ಕಾಲದವರಗೆ ಉಪವಾಸ ಸತ್ಯಾಗ್ರ ಕೈಗೊಂಡಿದ್ದರು. ಈ ಉಪವಾಸ ಸತ್ಯಾಗ್ರಹದಲ್ಲಿ ಐವರು ವಿದ್ಯಾರ್ಥಿಗಳು ಈಗಾಗಲೇ ನಿರಶನ ಅಂತ್ಯಗೊಳಿಸಿದ್ದು, 15 ಮಂದಿ ಇನ್ನೂ ನಿರಶನ ಮುಂದುವರಿಸಿದ್ದಾರೆ.