ನವದೆಹಲಿ: ಭಾರತದಲ್ಲಿ ಪರಿಶಿಷ್ಟ ಜಾತಿಯವರು ಬೌದ್ಧಮತಕ್ಕೆ ಮತಾಂತರಗೊಳ್ಳಲು ಹೆಚ್ಚು ಒಲವು ತೋರಿಸುತ್ತಿದ್ದಾರಂತೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ದಲಿತರಲ್ಲಿ ಬೌದ್ಧಮತದತ್ತ ಹೆಚ್ಚು ಒಲವು ಪ್ರಕಟವಾಗುತ್ತಿದ್ದು, ದಲಿತ ಹೋರಾಟಗಳು ಬೌದ್ಧಮತ ಮೂಲಕ ಯಶ ಕಾಣುತ್ತಿವೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.