ಗಾಯಾಳು ಮಗನಿಗೆ ಕಳಪೆ ಚಿಕಿತ್ಸೆ: ಆಸ್ಪತ್ರೆ ವಿರುದ್ಧ ಪವನ್ ಮಾಜಿ ಪತ್ನಿ ರೇಣು ಗರಂ

ವಿಚ್ಛೇದನ ಪಡೆದು ದೂರವಾಗಿರುವ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಪುಣೆಯ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಗರಂ ಆಗಿದ್ದಾರೆ...
ಪವನ್ ಕಲ್ಯಾಣ್-ರೇಣು ದೇಸಾಯಿ
ಪವನ್ ಕಲ್ಯಾಣ್-ರೇಣು ದೇಸಾಯಿ
Updated on

ಪುಣೆ: ವಿಚ್ಛೇದನ ಪಡೆದು ಸದ್ಯ ದೂರವಾಗಿರುವ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಅವರು ಪುಣೆಯ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಗರಂ ಆಗಿದ್ದಾರೆ.

ವಿಚ್ಛೇದನ ಬಳಿಕ ಪುಣೆಯಲ್ಲಿ ನೆಲೆಸಿರುವ ರೇಣು ದೇಸಾಯಿ ಪುತ್ರ ಅಕಿರ ಸೈಕಲ್ ನಿಂದ ಬಿದ್ದು ಗಾಯ ಮಾಡಿಕೊಂಡಿದ್ದಾನೆ. ಈ ಕೂಡಲೆ ರೇಣು ಅಕಿರ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ವಿಷಯ ಏನ್ನಪ್ಪಾ ಅಂದ್ರೆ ಅಕಿರ ನನ್ನು ಆಸ್ಪತ್ರೆ ದಾಖಲಿಸಿದಾಗ ಆಸ್ಪತ್ರೆ ಸಿಬ್ಬಂದಿ ತೋರಿದ ವರ್ತನೆ ಸರಿ ಇರಲಿಲ್ಲ ಎಂದು ಟ್ವೀಟರ್ ನಲ್ಲಿ ವಿಷಾದಿಸಿದ್ದಾರೆ.

ಚಿಕಿತ್ಸೆಗಾಗಿ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋದರೆ ಸಾವು ಕಂಡಿತ. ಅಲ್ಲಿನ ವೈದ್ಯರು ನರ್ಸ್ ಗಳು ಮಾನವ ಆತ್ಮವನ್ನೇ ಕೊಲ್ಲುತ್ತಾರೆ. ಹೀಗಾಗಿ ಇನ್ನೆಂದಿಗೂ ಆ ಆಸ್ಪತ್ರೆಗೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದಾರಂತೆ.

ಸೈಕಲ್ ನಿಂದ ಬಿದ್ದು ಗಾಯಗೊಂಡಿದ್ದ ಅಕಿರ ನನ್ನು ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾಗಿದ್ದ ಪುಣೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಗಾಯಗೊಂಡಿದ್ದ ಅಕಿರನನ್ನು ನೋಡಿದರು ಆಸ್ಪತ್ರೆ ವೈದ್ಯರು, ನರ್ಸ್ ಗಳು ಚಿಕಿತ್ಸೆ ನೀಡಲಿಲ್ಲ. ಇದು ಹೆಚ್ಚು ನೋವು ತಂದಿದೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಅಕಿರ ಗುಣಮುಖನಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ರೇಣು ಆತ್ಮೀಯರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com