ಸುಪ್ರಿಂ ಕೋರ್ಟ್ ತೀರ್ಪಿಗಾಗಿ ಕಾಯಲ್ಲ: ರಾಮಮಂದಿರ ನಿರ್ಮಾಣಕ್ಕೆ ಡಿಸೆಂಬರ್ 31 ಡೆಡ್ ಲೈನ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಲು ಡಿಸೆಂಬರ್ 31 ಅಂತಿಮ ಗಡುವು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ...
ಅಯೋಧ್ಯೆ
ಅಯೋಧ್ಯೆ

ಇಂಧೋರ್ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಲು ಡಿಸೆಂಬರ್ 31 ಅಂತಿಮ ಗಡುವು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.

ಉಜ್ಜೈನಿಯ ಕುಂಭಮೇಳದಲ್ಲಿ ಸಂತರನ್ನು ಉದ್ದೇಶಿಸಿ ಮಾತನಾಡಿದ ವಿಎಚ್ ಪಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಡಿಸೆಂಬರ್ 31 ರ ಒಳಗೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಬೇಕು.  ಅದಾದ ನಂತರ ಇನ್ನೂ ಹೆಚ್ಚಿನ ಸಮಯ ಕಾಯುವುದಕ್ಕಾಗುವುದಿಲ್ಲ, ನಮ್ಮ ತಾಳ್ಮೆಗೂ ಒಂದು ಮಿತಿ ಇದೆ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ನಿರ್ಮಾಣ ವಿಷಯದಲ್ಲಿ ಕೆಲ ಸಂಸ್ಥೆಗಳು ಅನಗತ್ಯವಾದ ಗೊಂದಲ ಸೃಷ್ಟಿಸುತ್ತಿವೆ ಎಂದು ಹೇಳಿದ ಅವರು, ನವೆಂಬರ್  1ರಿಂದ ರಾಮ ನಿರ್ಮಾಣ ಕಾರ್ಯ ಆರಂಭವಾಗುತ್ತದೆ ಎಂಬ ಹೇಳಿಕೆಯನ್ನು ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com